ಬ್ರಹ್ಮಾವರ: ಸುಧರ್ಮ ಪಾಲನೆಯಲ್ಲಿ, ಕರ್ತವ್ಯದಲ್ಲಿ ಚ್ಯುತಿ ಇಲ್ಲದಂತೆ ನಡೆದಾಗ ಧರ್ಮ ಪಾಲನೆಯಾಗುತ್ತದೆ ಎಂದು ಕೈವಲ್ಯ ಮಠಾಧೀಶರಾದ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. ಅವರು ಇತ್ತೀಚೆಗೆ ಬಾರಕೂರಿನ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ನವೀಕೃತ ಗಣೇಶೋತ್ಸವ ಗಣಪತಿ ಗುಡಿಯ ಉದ್ಘಾಟನೆ ಮತ್ತು ತ್ರಿದಿನಾತ್ಮಕ ಗಣೇಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಊರಿನ ದೇವಾಲಯದಲ್ಲಿ ಆರಾಧನೆ, ಉಪಾಸನೆಗಳು ಜರುಗತ್ತಲ್ಲಿದ್ದರೆ ಊರಿನ ಅಭಿವೃದ್ಧಿ ಮತು ಯಾವುದೇ ಧರ್ಮ ಕಾರ್ಯಗಳನ್ನು ಸಂಕಲ್ಪಿಸಿದ ಅವಧಿಯಲ್ಲಿಯೇ ಮಾಡುವುದು ಅತೀ ಸೂಕ್ತ ಎಂದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವೈ.ಗಣಪತಿ ಕಾಮತ್, ಕಾರ್ಯದರ್ಶಿ ವೆಂಕಟರಮಣ ಭಂಡಾರ್ಕಾರ್, ಕೋಶಾಧಿಕಾರಿ ಗೋಕುಲದಾಸ್ ಕಾಮತ್ ಮತ್ತು ಸದಸ್ಯರಾದ ವೈ. ಮೋಹನ್ದಾಸ್ ಕಾಮತ್, ಅಶ್ವಿನ್ ಕಾಮತ್, ಸುರೇಶ್ ಪೈ ವೈದಿಕ ವೃಂದದ ಬ್ರಹ್ಮಾವರ ರಾಧಾಕೃಷ್ಣ ಭಟ್, ಉಡುಪಿ ವಿಠಲ್ದಾಸ್ ಭಟ್ ಉಪಸ್ಥಿತರಿದ್ದರು.
ಚೇಂಪಿ ರಾಮಚಂದ್ರ ಭಟ್ ಸ್ವಾಗತಿಸಿ, ವಂದಿಸಿದರು.